Friday, December 31, 2010

ಹೊಸ ವರುಷ

 
ಹಾಯ್,,ನನ್ನೆಲ್ಲ ಬ್ಲಾಗ್ ಗೆಳೆಯ ಗೆಳತಿಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು .....ಮುಂಬರುವ ವರುಷ ನಿಮ್ಮ ಬಾಳಲ್ಲಿ ಸುಖ ಶಾಂತಿ ನೆಮ್ಮದಿಯಿಂದ  ತುಂಬಿರಲಿ  .........
 
ಬಂದಿಹುದು ಹೊಸ ವರುಷ ,,,,,
ತರಲಿ ನಿಮ್ಮ ಬಾಳಲ್ಲಿ ಹರುಷ .....
ನೋವು ದೂರಾಗಲಿ..
ಮನಸು ಹಗುರಾಗಲಿ..
ನಲಿವು ನಿಮ್ಮದಾಗಲಿ..
ಒಲವು  ಚಿಗುರಲಿ...
ಸಹಬಾಳ್ವೆ  ಮೈಗೂಡಲಿ..
ಕುಶಿ ತುಂಬಿದ ವರುಷ.....೨೦೧೧..ನಿಮ್ಮ  ಬಾಳನ್ನು ಆವರಿಸಿಕೊಳ್ಳಲಿ ...

                                     ಇಂತಿ ನಿಮ್ಮ ಸ್ಟುಪಿಡ್ ಗೆಳೆಯ.......
                                                                   ಸತ್ಯ









Tuesday, December 21, 2010

ಮುರಿದ ಸಾಲುಗಳು


ಹಾಯ್ ಫ್ರೆಂಡ್ಸ್... ಈ ಅಂಕಣಕ್ಕೆ ಸ್ಪೂರ್ತಿ,,,

ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು,,ಎಂಬ,ಬ್ಲಾಗಿನ  ಹೆಸರಲ್ಲಿ,,,ಮನಸಿಗೆ ಹತ್ತಿರವಾದ ಕವನ ಹಾಗು ಅಂಕಣಗಳನ್ನು ಬರೆಯುತ್ತಿರುವ ಸೌಮ್ಯ ಎಂಬವರು,,,,

 ಬೋರ್ ಹೊಡಿಸೋ ಕ್ಲಾಸಿನಲ್ಲಿ ಕುಳಿತು ನೋಟ್ ಬುಕ್ ನ ಕೊನೆಯ ಪೇಜಿನಲ್ಲಿ ಗೀಚಿದ ಸಾಲುಗಳನ್ನು ಅವರು..... ಬೇಸರದ ಮನದ ಭಾವಗಳಿಗೆ "ಮುರಿದ ಸಾಲುಗಳು " "broken lines "ಎಂಬ ತಲೆ ಬರಹದೊಂದಿಗೆ ತುಂಬಾ ಅದ್ಬುತವಾಗಿ ಬರೆದಿದ್ದರು,,,ಇದನ್ನು ಓದಿದ ನನಗೆ ನನ್ನ ನೋಟ್ ಬುಕ್ ಕೊನೆಯ ಹಾಳೆಗಳು ನೆನಪಿಗೆ ಬಂದವು,,ಅದರ ಪರಿಣಾಮವೇ..ಈ ನನ್ನ   ''ಮುರಿದ ಸಾಲುಗಳು'' 
 ಕ್ಷಮಿಸಿ ಸೌಮ್ಯ ...ನಾನು ಕೂಡ ಅದೇ ತಲೆ ಬರಹವನ್ನು ಉಪಯೋಗಿಸುತ್ತಿದ್ದೇನೆ,,ಕಾರಣ ಅದು,,ನನಗೆ  ತುಂಬಾ ಇಷ್ಟವಾಯಿತು ಮತ್ತು ಅದಕ್ಕಿಂತ ಸೂಕ್ತವಾದ ತಲೆ ಬರಹ ಇನ್ನೊಂದಿಲ್ಲ ಎಂಬುದು ನನ್ನ ಅನಿಸಿಕೆ..

''ಭಗ್ನ ಪ್ರೇಮಿಯ ಬಂಜರೆದೆಯಲ್ಲಿ ಭಾವನೆಗಳ ಕಾರಂಜಿ''...!

''ನಿನ್ನ ದಾರಿಗಾಗಿ ಕಾದೆ, ಕಾದೆ,ಕಾದು.. ಸುಸ್ತಾದೆ....ಆದರೂ ಕಾಯುತ್ತಿರುವೆ,,ಏಕೆಂದರೆ ನಾನಿನ್ನು ಬದುಕಿರುವೆ"........!
 
''ಕಣ್ ಮುಚ್ಚಿದರು  ನೀನೆ ಕಾಣುವೆ ಎಂದ ಮೇಲೆ  ನನ್ನ ಚಾಳೀಸಿಗೇನು ಕೆಲಸ''.......!
 
''ನಿನ್ನ ನೆನಪಲ್ಲೇ ನನ್ನ ನಾ ಮರತೆ....ಅದು ಸರಿ ನಾನು ಯಾರು...?
 
''ಮೊದಲ ನೋಟದಲ್ಲೇ ಪ್ರೀತಿ ಹುಟ್ಟತ್ತೆ ಅಂತ ನಿನ್ನ  ನೋಡೋದ ಮೇಲೆ  ಅನ್ನಿಸಿದ್ದು....
                                                         ಹಾಗೇನೆ,,
ಆ  ಪ್ರೀತಿ ಬಹಳ ದಿನ ಉಳಿಯಲ್ಲ ಅಂತ ಇವಾಗ ನನ್ನ ನೋಡಿ ಅನ್ನಸ್ತಾ ಇದೆ'' .....!
  
''ನೀನು ಪ್ರೀತ್ಸಲ್ಲ ಅಂತಾ ಗೊತ್ತಿದ್ರು ನಿನ್ನನ್ನೇ ಪ್ರೀತಿಸ್ತಾ ಇರೋ ನನ್ನಂತ ಭಂಡ  ಈ ಜಗತ್ತಿನಲ್ಲೇ  ಯಾರು  ಇಲ್ಲ ಕಣೆ ''....! 
 
ನಿದ್ದೆ ಇರದ ಪ್ರತಿ ರಾತ್ರಿ ನಿನದೆ ನೆನಪು ....
ನಿನ್ನ ನೆನದ ಪ್ರತಿ ರಾತ್ರಿ ನಿದ್ದೆಯೇ ಬಾರದು...
ನಿನ್ನ ನೆನಪಿರದ ರಾತ್ರಿಯೇ ಇಲ್ಲದಾಗಿದೆ...
ಬೇಗ ಬಂದು ನನ್ನ ಮಲಗಿಸೆ ಹುಡುಗಿ.....! 
 
ಮುಸ್ಸಂಜೆಯ ಕನಸಲ್ಲಿ ನಿನ್ನನ್ನು ಕಂಡೆ...
ಎಚ್ಚರಾಗಿ ಕಣ್ತೆರೆದು ನೋಡಿದೆ ಎಲ್ಲೆಲ್ಲು ಕತ್ತಲೆ....
ಮತ್ತೆ ಕಣ್ಮುಚ್ಚಿದೆ ಆದರೆ ನೀನೆ ಕಂಡೆ......!
 
''ಕಾಯುತ್ತಿವೆ  ಕಣ್ಣುಗಳು ನಿನ್ನ ಬರುವಿಕೆಗೆ....ಅಗಲಿದ ಅಮ್ಮನಿಗೆ ಕಾಯುತ್ತಿರುವ ಅನಾಥ ಮಗುವಿನಂತೆ''...! 
 
  ''ನೀನಿಲ್ಲದಿರುವ ನಾನು, ನೀರಿನಿಂದ  ಹೊರಗಿರುವ ಮೀನು''...! 
 
''ಪ್ರೀತಿಯ ಅಮಲಿನಲ್ಲಿ ಅಮಾವಾಸ್ಯೆಯ ಇರುಳು ಹಗಲಿನಂತೆ....!
 
''ದೀರ್ಘ ಕಾಲದ ಹ್ಯಾಂಗ್ ಓವರ್ ಮುರಿದ ಪ್ರೀತಿಯ ನಿಶೆ.....!
 
''ಯಾವೊಬ್ಬನು,,,ನಾ ಹುಟ್ಟುವಾಗ ಇದೆ ಜಾತಿಯಲ್ಲಿ ಹುಟ್ಟಬೇಕೆಂದು,,ಅಪ್ಲಿಕೇಶನ್  ಹಾಕ್ಕೊಂಡು,,ಹುಟ್ಟಲ್ಲ''...!
 
''ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ,,,
                     ಉಸಿರಿರೋವರೆಗೂ ನಾ ಪ್ರೀತಿಸುವೆ ಬಿಡದೆ ನಿನ್ನನೆ''....!
 
''ಸೋತವರೆಲ್ಲ,,,ಪ್ರೀತಿಸಲಿಲ್ಲವೇ,,,ಎಂಬ..ಪ್ರಶ್ನೆಯು,,,ಯಾವಾಗಲು ಕಾಡುತ್ತದೆ....
                              ನಾನು ಸೋತಿರುವೆ,,,,ಆದರೆ...ಜಾಸ್ತಿ,,ಪ್ರೀತಿಸಿದೆ ಅನ್ಸತ್ತೆ '',,,,! 
  
 
''she is the girl whoo fullfills all my imaagination...
  i forgot the thing that .....
                    even she also had an imagination........!
 
'' ಮರಳಿ ಬರುವೆಯಾ ನೀ ನೆಡೆದು ಹೋದ ದಾರಿಯಲ್ಲಿ,,,
ಕಾರಣ ಕಾಯುತ್ತಿರುವೆ ನಾ ಬೇರೆ ಯಾರಾದರು ಅಳಿಸಿಯಾರು ಎಂಬ ಭಯದಲ್ಲಿ'' .....! 
 
ಪ್ರೀತಿನಾ..ಪ್ರೀತಿಯಿಂದ ಗೆಲ್ಲಬೇಕು..ಅಂತ,,ಇರುವ ಪ್ರೀತಿಯನ್ನೆಲ್ಲಾ ಧಾರೆ ಎರೆದು... ಗೆದ್ದು,,ಪ್ರೆಮಿಗಳಾದವರು,,ಕೆಲವರು....
ಸೋತು... ಭಗ್ನ ಪ್ರೆಮಿಗಳಾದವರು,,ಹಲವರು,,,!
 
ಪ್ರೀತಿ ಮಾಡುವುದು,,ಅಪರಾಧ,,ಎಂದಾಗಿದ್ದರೆ,,,ಭೂಮಿಯ ಮೇಲೆ,,,,ಕಾರಾಗೃಹದ ವಿನಹ,,ಬೇರೇನೂ,,ಇರುತ್ತಿರಲಿಲ್ಲ...!
 
ಭಾಷೆ ಉಳಿವಿಗೆ ...
ಬೇಕಿಲ್ಲ ಗೆಳೆಯ ಬಲಿಧಾನ....
ಮೊದಲು ನೀ ನುಡಿ ನಿನ್ನ ಭಾಷೆಯ ,,,
ಕಂಡಾಗ ಪರಭಾಷೆಯ ಮಹಾಶಯ..........!

''ನಾ ಕಂಡ ಪ್ರತಿ ಚಂದದ ಹುಡುಗಿ ನನ್ನ ಪ್ರಿಯತಮೆಯಾಗಿದ್ದರೆ ಎಂಬ ನವಿರಾದ ಮನಸ್ಸಿನ ಭಾವ ನಿಜವಾಗಿದ್ದರೆ....? 
 
''ಕಣ್ಣು ಕಡಲಾದ ಮೇಲೆ ಕಣ್ಣೀರಿಗೆ ಬರವೇ,,,,!
 
''ಕೊರೆಯುವ ಚಳಿಯಲ್ಲಿ, ಸುರಿಯುವ ಮಳೆಯಲ್ಲಿ ಅದ್ಯಾಕೆ ನೆನಪಿಗೆ ಬರ್ತಿಯೇ,,,ಹುಡುಗಿ''...! 
 
"ಬಳಲಿ ಬೆಂಡಾಗಿರುವೆ  ಆದರೂ ತೆಳಲಾಗದೆ ಮುಳುಗುತ್ತಿರುವೆ ...! 
 
''ಇರನಾರದವನು ಇರುವೆ ಬಿಟ್ಕೊಂಡ ಅಂತ ನಿನ್ನ ಪ್ರೀತಿಸಿದ್ ಮೇಲೆ ಅನ್ನಿಸಿದ್ದು...! 
 
''ಹೆಣ್ಣು '' ತರ್ಕಕ್ಕೆ ನಿಲುಕದವಳು, ವರ್ಣನೆಗೆ ಎಟುಕದವಳು, ಊಹೆಗೆ ಸಿಗದವಳು...ಒಂದೇ ಮಾತಲ್ಲಿ ಹೇಳ್ಬೇಕಂದ್ರೆ.....
ನಮ್ ತಾಯಾಣೆ ಗೊತ್ತಿಲ್ಲ ...!  
 
 
                                                     ಸತ್ಯ ಸಿಂಪ್ಲಿ ಸ್ಟುಪಿಡ್...? 

 

Friday, December 17, 2010

ಭವ್ಯದೀಪ್ತಿ......


ಹೊಸ  ಬಾಳ  ನಿರೀಕ್ಷೆಯಲ್ಲಿ  ..
ಹೊಸ  ಬಯಕೆಗಳ ಹೊತ್ತು
ಹೊರಟಿರುವೆ ನಾನು ಒಂಟಿಯಾಗಿ,,,

ಭವಿಷ್ಯದ ..ಭಯಕ್ಕೆ  ..ವರ್ತಮಾನಗಳ ಬಲಿಕೊಟ್ಟು,,,
ಮತ್ತೊಮ್ಮೆ ಭೂತಕಾಲದ ಅಧಿಪತಿಯಾಗಿ ..
ಬಳಲಬಾರದೆಂಬ ತವಕ ...

ಬೆಳಕಿನಲ್ಲೂ.ಕತ್ತಲೆಂಬ ಭಾಸವೇ ಅಡಗಿಹುದು..
ನವೀನತೆಯಲ್ಲೂ ಪುರಾತನದ  ಕಂಪೆ ತುಂಬಿಹುದು...
ಪ್ರತಿ ನಗುವನ್ನು  ಕಣ್ಣೀರೆ ಹಿಂಬಾಲಿಸಿಹುದು  

ಅಂಧಕಾರದಿಂದ  ಹೊರತಂದು  ..
ನವೀನತೆಯ  ಸುವಾಸನೆಯ ಉಣಿಸಿ
ಕಣ್ಣಿರಿನ ಸಾಗರದಲ್ಲಿ  ನಗುವಿನ ಅಲೆಗಳನ್ನು
ಸದಾ ಕಾಲ ಹೊತ್ತು ತರುವ ....
ನೊಂದ ಜೀವಕ್ಕೆ ತಂಪೆರೆಯುವ  ..

ಒಂದು ಪುಟ್ಟ ಜೀವಕ್ಕಾಗಿ ಹಂಬಲಿಸಿಹುದು...
ಈ ನನ್ನ ಮನ...
ಎಲ್ಲಿರುವೆ....ನೀ ...
ಬೇಗ ಬಂದು ಈ ನನ್ನ ಹೊಸ ಬಾಳ  ಬೆಳಗೆ..
                                                ಭವ್ಯದೀಪ್ತಿ......

                                       ಸತ್ಯ ಸಿಂಪ್ಲಿ ಸ್ಟುಪಿಡ್

Monday, October 11, 2010

ನಿಜವಾದ ಮನುಜರು.....


ಹಾಯ್ 
ಫ್ರೆಂಡ್ಸ್  ಅಕ್ಟೋಬರ್ ,,10 "ವಿಶ್ವ  ಮಾನಸಿಕ  ಆರೋಗ್ಯ  ದಿನ"
ನಾನು ಮಾನಸಿಕ ಆರೋಗ್ಯ  ಶುಶ್ರೂಶ್ರತೆಯಲ್ಲಿ msc ಮಾಡುತ್ತಿದ್ದು,,, ಈ ದಿನದ ವಿಶೇಷತೆಗೆ,,,ಏನಾದರು,,ಮಾಡಬೇಕೆಂದು,,, ಹೊರಟಾಗ..ನನ್ನಿಂದ  ಮೂಡಿಬಂದ ಒಂದು ಪುಟ್ಟ ಕವನ...
NIMHANS ...ಎಂಬ ಮಾನಸಿಕ ಅಸ್ವಸ್ತರ ಆಸ್ಪತ್ರೆಯಲ್ಲಿ ನನಗಾದ ಕೆಲವು ಅವಿಸ್ಮರಣೀಯ ಅನುಭವಗಳೇ,,ನನ್ನ ಈ ಕವನಕ್ಕೆ  ಸ್ಪೂರ್ತಿ,,,

ಸರಿ ತಪ್ಪು ತಿಳಿಯದ ಮುಗ್ದರಿವರು..
ಮನಸಿಗನಿಸಿದ್ದನ್ನು ಮಾಡುವ ಮನುಜರಿವರು..
ಹೊರ ಲೋಕದ ಅರಿವಿಲ್ಲದೆ,,
ತಮ್ಮದೇ ಲೋಕದಲ್ಲಿ ತೇಲುತಿಹರು,,,
ಅದಾವ ಜನ್ಮದ ಪಾಪವೋ..
ಬದುಕುತಿಹರು ಭುವಿಯಲಿಂದು..
"ಮತಿ ವಿಕಲರೆಂಬ" ಬಿರುದಿನೊಂದಿಗೆ ....

 ಪ್ರೀತಿಯ ಪಾಶಕ್ಕೆ,,,ಬಲಿಯಾದವರುಂಟು  ..
ಸಂಸಾರದ ಜಂಜಾಟಕ್ಕೆ ಬೇಸತ್ತು ಬಂದವರುಂಟು..
ಹುಟ್ಟುತ್ತಲೇ,,,ಮತಿ ವಿಕಲರೆಂಬ ,ಬಿರುದನ್ನೂ ಬಳುವಳಿಯಾಗಿ ಪಡೆದವರುಂಟು..
ಸಮಾಜದ ಶೋಷಣೆಗೆ ಒಳಗಾದ ಬಲಹೀನರುಂಟು  ,,,.
ಆದರೂ ಕೂಡ ಇವರೆಲ್ಲ..ಯಾರು ,,,,,ನಮ್ಮಂತೆ,,ಮನುಜರು.....

ನಮ್ಮಲ್ಲಿರದ ಅನ್ಯೋನ್ಯತೆ ಅವರಲ್ಲುಂಟು  ...
ಸಿಕ್ಕ ತುತ್ತನ್ನು ಹಂಚಿ ತಿನ್ನುವ ಮನೋಭಾವವುಂಟು...

ಮೇಲು ಕೀಳು ಎಂಬ ಬೇದ ಭಾವಗಳಿಲ್ಲ
ಮೊದಲು ಕೊನೆ ಎಂಬ ಸ್ಪರ್ಧೆಯಲ್ಲಿ ನಿಂತವರಲ್ಲ  

ಅಸೂಯೆ,ಮೋಸ, ದ್ವೇಷಗಳೆಂಬ  ಪದದ ಅರಿವಿಲ್ಲದ ಮುಗ್ದರಿವರು 
ಪ್ರೀತಿ ವಿಶ್ವಾಸದಲ್ಲಿ ಯಾರಿಗಿಂತ  ಕಡಿಮೆ ಇಲ್ಲ  ಇವರು 
ಇಷ್ಟೆಲ್ಲಾ  ಇರುವ ಇವರು, ನಿಜವಾದ ಮನುಜರು.....


                             ಸತ್ಯ ಸಿಂಪ್ಲಿ ಸ್ಟುಪಿಡ್......
                           

ನಿರೀಕ್ಷಿತ.....


ಹಾಯ್ ಗೆಳೆಯರೇ ಈ ಕವನ,,ಪ್ರೀತಿಯಲ್ಲಿ ...ಸೋತ,,ನನ್ನ ಗೆಳತಿಗಾಗಿ,,,,
                         ಸೋತವರೆಲ್ಲ,,,ಪ್ರೀತಿಸಲಿಲ್ಲವೇ,,,ಎಂಬ..ಪ್ರಶ್ನೆಯು,,,ಯಾವಾಗಲು ಕಾಡುತ್ತದೆ....
                                                      ನಾನು ಸೋತಿರುವೆ,,,,ಆದರೆ...ಜಾಸ್ತಿ,,ಪ್ರೀತಿಸಿದೆ ಅನ್ಸತ್ತೆ,,,,




ನಾ ನಿನಗೆ ಚಿರಪರಿಚಿತನಲ್ಲದಿರಬಹುದು ,,,
ಆದರೆ ಅಪರಿಚತನಂತು  ಅಲ್ಲ ..
ಹೀಗಿರುವಾಗ ಏನೆಂದು ಬರೆಯಲಿ...ಗೆಳತಿ,,,
ಆದರೂ,,,ಬರೆಯಲೇ ಬೇಕೆಂದು,,ಹೊರಟಿರುವೆ...

              ಭಾವನೆಗಳಿಗೆ ಬರವಿಲ್ಲ ನಿನ್ನ ಬಳಿ..
              ಮಾತಿನಲ್ಲೇ ಕಟ್ಟುವೆ ಸುಂದರ ಸರಪಳಿ..
              ಅಭಿನಯ ನಿನಗೆ ಬಂದ ಬಳುವಳಿ..
              ಬುದ್ದಿಯಲ್ಲೂ ನೀ  ಭವ್ಯ ಶಿರೋಮಣಿ
              ಇಷ್ಟಿದ್ದರೂ  
              ನಲುಗಿಸಿಹುದು ನಿನ್ನ ಪ್ರೀತಿಯ ಸುಳಿ,,, 

ತುಂಬಿಹುದು,,ನೋವು ನಗುವಿನ ಬೆನ್ನಲ್ಲೇ ..
ವ್ಯಕ್ತಪಡಿಸಲಾಗದೆ ಮರುಗುತ್ತಿರುವೆ ಮನಸಲ್ಲೇ ....
ಸುಳ್ಳಿಗೆ ಬೆಲೆಕೊಟ್ಟು, ಪ್ರೀತಿಯ ಬಿಡಲಾಗದೆ,,
ಪ್ರೀತಿಗೆ ಬೆಲೆಕೊಟ್ಟು, ಸುಳ್ಳನ್ನು ಮರೆಯಲಾಗದೆ..
ಕಾಲಲ್ಲಿ ಗುಂಡು, ತಲೆಯಲ್ಲಿ ಬೆಂಡು.
ಮುಳುಗಲೊಲ್ಲದು, ತೆಲಲೋಲ್ಲದು ಎಂಬಂತಾಗಿದೆ ನಿನ್ನೀ ಜೀವನ .......
                                 ಗೆಳೆತಿ ........
ಈ ಪ್ರೀತಿಯೇ ಹೀಗೆ ಒಂಥರಾ  ,,,ಥರಾ  
                   
           ಏನಾಗಲಿ,,,,,ಮುಂದೆ ಸಾಗು ,,ನೀ,,,
                                 ಬಯಸಿದ್ದೆಲ್ಲ ಸಿಗದು,,ಬಾಳಲಿ,,,,,,,,

                                                        ಸತ್ಯ..ಸಿಂಪ್ಲಿ..ಸ್ಟುಪಿಡ್....


            

Monday, September 13, 2010

.ಪ್ರದೀಪ.....


ಸರಳತೆಯ ಪ್ರತೀಕ,,,,,,,,
ಸೃಜನಶೀಲತೆಯ ರೂವಾರಿ,,,,
ಭಾವನೆಗಳ ಬಂಡಾರ.....
ಹೃದಯ ಕದಿಯುವ ಮುಗುಳ್ನಗೆ .....
ಛಾಯಾಗ್ರಾಹಕನ ಚಾತುರ್ಯ,,,,,
ಇವಿಷ್ಟು ಉಳ್ಳವನೇ ನನ್ನ  ಬಲು ಅಪರೂಪದ ಗೆಳೆಯ
ಪ್ರಜ್ವಲಿಸುವ ದೀಪ ..ಪ್ರದೀಪ.....
ತಿಳಿಯದೆ ಬೆಳೆದು...
  ಅರಳಿ ಹೂವಾಗಿ ನಿಂತಿರುವ
  ಸ್ನೇಹದ ಎಸಳುಗಳು ನಾವು.....

ಸಾಗಲಿ ಗೆಳೆಯ ನಿನ್ನ ಪಯಣ
ಪ್ರೇಮದ ಕವಿತೆಯ ಮೇಲೆ...
ಬೆಳೆಯಲಿ ನಿನ್ನ ಪ್ರತಿಭೆ
ಛಾಯಾಗ್ರಾಹಕನಾಗಿ
ನಾನಿರುವೆ ನಿನ್ನ ಹಿಂದೆ,,,,,,ಅಭಿಮಾನಿ ಗೆಳೆಯನಾಗಿ..
ಬಾಳು ನೂರು ವರುಷ,,ಹಸನ್ಮುಖಿಯಾಗಿ ,,,
         
೨೬ ನೇ ವಸಂತಕ್ಕೆ ಕಾಲಿಡುತ್ತಿರುವ ನಿನಗೆ
                      ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು,,,,,,,,,
                                            ಇಂತಿ,,ನಿನ್ನ ..ಆರ್ಕುಟ್ ಗೆಳೆಯ..
                                                                          
                                                                               ಸಿಂಪ್ಲಿ ಸ್ಟುಪಿಡ್ ಸತ್ಯ......



           

                                

miss you....................


I used to miss her,even i am with her...
may be i know that, i am going to miss  her for ever in future,,,,,,,,,,
I love her even after the break up....
bcoz that is the only thing which i know.........
I may not be a perfect pair for her,,
but, my love overtakes all the imperfectness...
I always want to be happy,,,,
bcoz i dont want to make her the reason for my tears......
whenever i feel to cry, i wil shout loudly and say....
I am the most happiest person in the world........
she is the girl whoo fullfills all my imaagination...
i forgot the thing that .....
                    even she also had an imagination........


                               sathya simply stupid................

Monday, August 30, 2010

ಹೆಜ್ಜೆ ಗುರುತು......


 ನಾ ಪ್ರೀತಿಸಿ ದಣಿದಿರುವೆ ...
ನೀ ಪ್ರೀತಿಸಲಾಗದೆ ಮಣಿದಿರುವೆ.....
ದಣಿವು ದೇಹಕ್ಕಲ್ಲ ಮನಸ್ಸಿಗೆ..
ಸೋಲು ನಿನಗಲ್ಲ ನನ್ನ ಪ್ರೀತಿಗೆ ...
ದಣಿದರು ದಕ್ಕಲಿಲ್ಲವಲ್ಲ ಎಂಬ ತವಕ ನನಗೆ...
ಸೋತು ದೂರಾದೆನಲ್ಲ ಎಂಬ  ಅಳುಕು ನಿನಗೆ ....
ಕಾಡುತ್ತಿವೆ,,ನಿನ್ನ ಹೆಜ್ಜೆ ಗುರುತುಗಳು...
ಕನಸುಗಳಾಗಿ, ನೆನಪುಗಳಾಗಿ,,
ನಾ ನಡೆವ ದಾರಿಯಲ್ಲಿ.....
ಮರಳಿ ಬರುವೆಯಾ ನೀ ನೆಡೆದು ಹೋದ ದಾರಿಯಲ್ಲಿ,,,
ಕಾರಣ ಕಾಯುತ್ತಿರುವೆ ನಾ ಬೇರೆ ಯಾರಾದರು ಅಳಿಸಿಯಾರು ಎಂಬ ಭಯದಲ್ಲಿ.....
                                  
                                                                   ಸತ್ಯ ಸಿಂಪ್ಲಿ ಸ್ಟುಪಿಡ್......

Thursday, March 11, 2010

ಮತ್ತೆ ಬರೆದೆ ಕವನ .....


ಬಹು ದಿನಗಳಾಯ್ತು
             ನಾ ಬರೆದು .....ಕವನ
ಎಷ್ಟೇ  ಪ್ರಯತ್ನಿಸಿದರೂ
      ಆಗುತ್ತಿಲ್ಲ ಕವನದ......ಜನನ
ಇದರಿಂದ ಪರಿತಪಿಸಿ ನೊಂದಿಹುದು
                 ಸತ್ಯನ ಈ....... ಮನ
ಭಾವನೆಗಳಿಗೇನು ಬರವಿಲ್ಲ .............
ಸ್ಪೂರ್ತಿಯ ಸೆಲೆ ಸದ್ಯಕ್ಕಂತೂ ಬತ್ತಿಲ್ಲ.....
ಪದಗಳ ಭಂಡಾರವು ಕ್ಷೀಣಿಸಿಲ್ಲ.....
ಇನ್ನು ನಾ ಕವಿಯೆಂಬ ನೆನಪು ನನ್ನಿಂದ ಮಾಸಿಲ್ಲ....
ಇಷ್ಟೆಲ್ಲಾ ಇದ್ದರು ನನ್ನಿಂದ ಕವಿತೆಯೊಂದು ಮೂಡುತ್ತಿಲ್ಲ
ಇದರಿಂದ ನಾ ಬೇಸತ್ತು...
ಇಂದು ಬರೆಯಲೇಬೇಕೆಂದು ಹೊರಟಾಗ..
ಮೂಡಿತು...ಈ ಕಿರು ಕವನ ........

                      ಸತ್ಯ ಸಿಂಪ್ಲಿ ಸ್ಟುಪಿಡ್........

Sunday, February 14, 2010

...ಪ್ರೇಮಿಗಳ ದಿನ,,,,,,,


ಫೆಬ್ರವರಿ ೧೪ ...ಪ್ರೇಮಿಗಳ ದಿನ,,,,,,,
                   ಪ್ರೀತಿನಾ..ಪ್ರೀತಿಯಿಂದ ಗೆಲ್ಲಬೇಕು..ಅಂತ,,ಇರುವ ಪ್ರೀತಿಯನ್ನೆಲ್ಲಾ ಧಾರೆ ಎರೆದು... ಗೆದ್ದು,,ಪ್ರೆಮಿಗಳಾದವರು,,ಕೆಲವರು,,,...,,ಸೋತು... ಭಗ್ನ ಪ್ರೆಮಿಗಳಾದವರು,,ಹಲವರು,,, .....
ಪ್ರೀತಿಯಲ್ಲಿ ಗೆದ್ದವರಿಗೆ,,ಪ್ರೇಮಿಗಳ ಆಚರಣೆಯ,,,ಸಡಗರ,,,,, ಸೋತು,,ಭಗ್ನ ಪ್ರೆಮಿಗಳಾದವರಿಗೆ ...ಪ್ರೀತಿ,,ಯಾಕೆ,,ಮಾಡಿದೆನೋ,,ಎಂಬ ಪಶ್ಚತಾಪದಲ್ಲಿ..ಮನಸ್ಸು,,,ಮರಮರ ....
                       ಎಲ್ಲ,,ಪ್ರೇಮಿಗಳಿಗೂ,,,ಹಾಗು,,ನನ್ನ ಪ್ರೀತಿಯ ನೊಂದ,,ಭಗ್ನ ಪ್ರೇಮಿಗಳಿಗೂ....ನಿಮ್ಮ ಭಗ್ನ ಪ್ರೇಮಿ ಗೆಳೆಯ,,,ಸತ್ಯ ಸಿಂಪ್ಲಿ ಸ್ತುಪಿಡ್ನಿಂದ...... ಪ್ರೇಮಿಗಳ ದಿನದ ಶುಭಾಶಯಗಳು,,,,,

ಶ್ರೀ,,ರಾಮ ಸೇನೆಯವರಿಗೆ,,,,,
ನಾವು,,ಭಾರತೀಯರು,,,ಪಾಶ್ಚಾತ್ಯ ಸಂಸ್ಕೃತಿಯನ್ನು,,,ಅಳವಡಿಸಿ ಕೊಳ್ಳಬಾರದು  ,,ಎಂಬ ನಿಮ್ಮ ನಿಲಿವಿಗೆ,,,,ಸ್ವಾಗತ....
ಆದರೆ,,ನಿಮಗೆ,,ಭಾರತೀಯರಲ್ಲಿ,,ಪ್ರೇಮಿಗಳ ದಿನದ ಆಚರಣೆ ಮಾತ್ರ  ಪಾಶ್ಚಾತ್ಯ ಸಂಸ್ಕೃತಿಯ,,,ಪ್ರತೀಕವಾಗಿ ,,ಕಂಡಿತೆ,,,,ಇನ್ನುಳಿದ,,,ಎಲ್ಲ ವಿಚಾರದಲ್ಲೂ,,ನಾವು,,ಭಾರತೀಯ   ಸಂಸ್ಕೃತಿಯನ್ನೇ ,,ಬಳಸುತ್ತಿದ್ದೆವೆಯೇ,, ಒಮ್ಮೆ ಯೋಚಿಸಿ,,ನೋಡಿ,,,,
                      ಪ್ರೇಮಿಗಳ ದಿನ....ಪಾಶ್ಚಾತ್ಯ ಸಂಸ್ಕೃತಿಯ ಪ್ರತೀಕವಿರಬಹುದು ..ಆದರೆ,,,ಪ್ರೀತಿ..ಅಲ್ಲ...ಭಾರತೀಯರಿಗೂ,,ಹೃದಯ ಮನಸ್ಸು ಭಾವನೆ,,ಎಲ್ಲ ಇವೆ,,,,
ಪವಿತ್ರವಾದ ಪ್ರೀತಿಗೆ,,,ಸಂಸ್ಕೃತಿಯೆಂಬ,,,ಪವಿತ್ರ ಪದವನ್ನು ,,ಅಕ್ರಮ..ರೀತಯಲ್ಲಿ.. ಬೆರೆಸಿ,,,ಎಲ್ಲ ಯುವ ಜನಾಂಗದ...ಅಸಂಸ್ಕ್ರುತಿಯೆಂಬ  ಅಪವಿತ್ರತೆಯ,,,,ದ್ವೇಷಕ್ಕೆ,,ಗುರಿಯಾಗಬೇಡಿ,,,,ಒಳ್ಳೆಯದು,,ಎಲ್ಲೇ ಇದ್ದರು,,ಅಳವಡಿಸಿಕೊಳ್ಳಿ...ನೀವು ಚಿಕ್ಕವರಾಗುವುದಿಲ್ಲ ........
ಪ್ರೀತಿ ಮಾಡುವುದು,,ಅಪರಾಧ,,ಎಂದಾಗಿದ್ದರೆ,,,ಭೂಮಿಯ ಮೇಲೆ,,,,ಕಾರಾಗೃಹದ ವಿನಹ,,ಬೇರೇನೂ,,ಇರುತ್ತಿರಲಿಲ್ಲ ,,,,

ಪ್ರೇಮಿಗಳಿಗೆ,,,,,,,
 ಗೆಳೆಯರೇ,,ಪ್ರೇಮಿಗಳು,,ಅಂದರೆ ಯಾರು,,,,,ಪ್ರೀತಿಯಲ್ಲಿ ಗೆದ್ದವರು ಅನ್ನಬಹುದೇ,,,,,ಜಗತ್ತಿನಲ್ಲಿ ..ಪ್ರೀತಿಯಲ್ಲಿ ಗೆದ್ದವರಿಗಿಂತ,,ಸೋತವರೇ,,ಹೆಚ್ಚು,,,,,ಯಾಕೆ..?  ಸೋತವರಾರು,,ಪ್ರೀತಿಸಲೇ ಇಲ್ಲವೇ,,,?
ಅಸಲಿಗೆ,,ಪ್ರೀತಿ ..ಎಂದರೆ,,,ಏನು,,,,,
ಎರಡು,,ಮನಸ್ಸುಗಳ,,ಮಿಲನ,,ಅನ್ನಬಹುದೇ....
ಅಥವಾ
ಮೊದಲ ನೋಟದಲ್ಲೇ,,,,ಮನಸನ್ನು,,,,ಸೆರೆಮಾಡಿದ,,ಭಾವ,,ಅನ್ನಬಹುದೇ...
ಅಥವಾ,,
ತಪ್ಪು ಅಂತ,,ತಿಳಿದ ,,ಮೇಲು,,ಮಾಡುವ ಮತ್ತೊಂದು,,ತಪ್ಪು,,ಅನ್ನಬಹುದೇ,,,,
ಹೀಗೆ,,ಒಬ್ಬೊಬ್ಬರದು,,ಒಂದೊಂದು,,ವ್ಯಾಕ್ಯಾನ...
ಗೆಳೆಯರಿಗೆ,,ಪ್ರೀತಿಗೆ,,ವ್ಯಾಕ್ಯಾನನೆ  ,,ಇಲ್ಲ,,,
ಅದೊಂದು,,,,,ವರ್ಣಿಸಲಾಗದೆ ,,,,,ಅನುಭವಿಸುವ,,ಸುಂದರ,,ಭಾವ,,,,ಇದು,,ಕೂಡ,, ವ್ಯಾಕ್ಯಾನ ...ಅಲ್ಲ ನನ್ನ ಅಭಿಪ್ರಾಯ,,,,,
ಹೀಗಿರುವಾಗ,,,,ನಮ್ಮ ಯುವಕರು,,ಪ್ರೀತಿ,,ಯಾಕೆ ಮಾಡ್ತಾರೆ,,,?
ಶೋಕಿಗಾಗಿ,,,,
ವಯಸ್ಸಿನ ಹಂಬಲಕ್ಕಾಗಿ....
ಕ್ಷಣಿಕ ಸುಖಕ್ಕಾಗಿ .......
ಕಾಲ ಹರಣ ಮಾಡಲು  .....
 ಇನ್ನು,,ಇತ್ಯಾದಿ ಕಾರಣಗಳಿಗಾಗಿ  ,,ಪ್ರೀತಿಮಾಡ್ತಾರೆ,,,,ಇದನ್ನೆಲ್ಲಾ ಪ್ರೀತಿ..ಎಂದು,,ಯಾವತ್ತಿಗೂ,,,,ಕರೆಯಬೇಡಿ,,,,
ಪ್ರೀತಿ,,ಪವಿತ್ರವಾದ ಸಂಬಂದ  ,,,,ಅದನ್ನು,,,ಕೆಟ್ಟ ಕಾರಣಗಳಿಗಾಗಿ,,,,,ಉಪಯೋಗಿಸಬೇಡಿ,,,,,,,
ಹಾಗೆ,,ಮಾಡಿದಲ್ಲಿ ನೀವು ನಮ್ಮ ಸಂಸ್ಕೃತಿ,,ಹಾಗು ನಿಮ್ಮ ಪ್ರೀತಿ ಎರಡನ್ನು ಉಳಿಸಿದಂತೆ,,,,,
ಎಲ್ಲರ ,,ಪ್ರೀತಿ,, ಯಶಸ್ವಿಯಾಗಲಿ,,ಸುಮಧುರ ಸುಂದರ ಬದುಕು ನಿಮ್ಮದಾಗಲಿ.....
                          ಸಿಂಪ್ಲಿ ಸ್ಟುಪಿಡ್ ಸತ್ಯ,,,,,?

Sunday, February 07, 2010

my autograph.....


ಹಾಯ್ ಗೆಳೆಯರೇ ಇದು ನಿಮ್ಮ ಸತ್ಯನ ಆಟೋಗ್ರಾಪ್ ......
ನಾನು ಇವಾಗ ಹೇಳೋಕೆ ಹೊರಟಿರೋದು ನನ್ನ ಜೀವನದಲ್ಲಿ ನಡೆದ ಒಂದು ಪ್ರೇಮ ಕಥೆಯ ಬಗ್ಗೆ,,,,,,,

ಕಂಡೆ ಕಡಲ ತೀರದ ಚೆಲುವೆಯ...
ಕನ್ನಡಮ್ಮನ ಮಡಿಲಲ್ಲಿ .....
ಕಂಡ ಒಡನೆ ಮೂಡಿತು ಪ್ರೀತಿ....
ಎನ್ನ ಮನದಂಗಳದಲ್ಲಿ .......

ಇದೇನಿದು ಕವನ ಅಂದುಕೊಂಡ್ರಾ? ಮುಂದೆ...ಓದಿ....
ನನ್ನಾಕೆಯನ್ನು...... ಕ್ಷಮಿಸಿ ನಾ ಇಷ್ಟ ಪಟ್ಟ ಹುಡುಗಿಯನ್ನು ಐದು ವರ್ಷದ ಹಿಂದೆ ಮೊದಲ ಬಾರಿ ಕಂಡಾಗ ಬರೆದ ನಾಲ್ಕು ಸಾಲುಗಳಿವು... ಅದೇನಾಯ್ತೋ...ಮುಂದೆ ಬರೆಯಲು ಆಗಲೇ ಇಲ್ಲ... ಬಹಳ ಪ್ರಯತ್ನ ಪಟ್ಟು ಕೊನೆಗೆ ಕ್ಲೈಮಾಕ್ಸ್ ...ನೋಡಿ ಬರೆದರಾಯಿತು ಎಂದು ಸುಮ್ಮನಿದ್ದೆ,,,,, ಇವಾಗ ಆ ಕಾಲ ಕೂಡಿ ಬಂದಿದೆ,,,,ಶ್ ಶ್ ಶ್
ಫ್ರೆಂಡ್ಸ್,,,ನಾ ಇಷ್ಟ ಪಟ್ಟ ಹುಡುಗಿ ಕಡಲ ತೀರದವಳು...ಅಂದರೆ ಕೇರಳದವಳು....ಹಾಗೆ ಚೆಲುವೆಯು... ಕೂಡ .ನಾ ಅವಳ ಕಂಡಿದ್ದು ನನ್ನ ಮೊದಲ ವರ್ಷದ ಬಿ ಎಸ್ಸಿ ಕ್ಲಾಸ್ನಲ್ಲಿ ...ಆ ದಿನ ಮೊದಲ ನೋಟಕ್ಕೆ ಎದ್ವಾ ತದ್ವಾ ಫಿದಾ
ಆಗ್ ಬಿಟ್ಟಿದ್ದೆ ಹೇಳ್ಬೇಕು ಅಂದ್ರೆ,,ಪಾಗಲ್ ಆಗಿದ್ದೆ ಕಾರಣ ...ಆ ದಿನ ಆಕೆ ಧರಿಸಿದ್ದ ನೀಲಿ ಬಣ್ಣದ ಫುಲ್ ಸ್ಲೀವ್ ಡ್ರೆಸ್, ಮತ್ತು ಆ ಮುಗ್ದ ಮುಗುಳ್ನಗೆ, ಹಣೆಯಲ್ಲಿ ದರಿಸಿದ್ದ ಕುಂಕುಮ, ಒಂದೇ ನೋಟಕ್ಕೆ ನನ್ನನ್ನು ನಾ ಮರೆಯುವಂತೆ ಮಾಡಿದ್ದಳು, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಕಲ್ಪನೆಯ ಹುಡುಗಿ ಅವಳಾಗಿದ್ದಳು.....ಇಷ್ಟು ಸಾಕಲ್ಲವೇ ಅವಳ ಬಗ್ಗೆ,,,,,
ಅಂದಿನಿಂದ ನನ್ನ ಸೈಕಲ್ ತುಳಿತ ಶುರುವಾಯಿತು ......ಎಲ್ಲೇ ಹೋದರು ಹಿಂಬಾಲಿಸುವುದು...ಅವಳು ಲೈಬ್ರರಿಗೆ ಹೋದ ತಕ್ಷಣ ನನಗೆ ಓದುವುದರ ಬಗ್ಗೆ ಇಂಟರೆಸ್ಟ್ ಬರ್ತಿತ್ತು..ಅವಳಿಗೆ ತಿಳಿಯದಂತೆ ಅವಳನ್ನು ಕದ್ದು ನೋಡುವುದು,,,ಇವೆಲ್ಲ ನಡೆದೆ ಇತ್ತು.. ಎಷ್ಟೇ ಆದರು ಒಂದೇ ಕ್ಲಾಸ್ ಅಲ್ವಾ ಹಾಗೆ ಪರಿಚಯನೂ ಆಯ್ತು ...ಆದರೆ ನಾ ಮಾತಾಡಿಸಿದ್ದು ಕಡಿಮೆ ..ಏಕೆಂದರೆ ಅದು ಹೇಳೋಕಾಗೋಲ್ಲ ,,,ಪ್ರೀತಿಸಿ ನೋಡಿ..ನಿಮಗೆ ತಿಳಿಯುತ್ತೆ ..ಹೀಗೆ ಅವಳನ್ನು ನೋಡುತ್ತಾ ನೋಡುತ್ತಾ ಮೂರು ವರ್ಷಕಳದೆ....
ಈ ಮೂರು ವರ್ಷದಲ್ಲಿ ನಾ ಅವಳ ಮೊದಲು ನೋಡಿದ ದಿನ ,,ಅವಳ ಮೊಬೈಲ್ ನಂಬರ್ ಸಿಕ್ಕ ದಿನ ..ಹೇಗೆ ಹಲವಾರು ವಿಷಯಗಳು ನನ್ನ ಡೈರಿಯಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿವೆ,,,ಅಷ್ಟೇ ಯಾಕೆ ಇವತ್ತಿಗೂ ಅವಳೇ ನನ್ನ ಎಲ್ಲ ಇ ಮೇಲ್
IDಗೆ ಪಾಸ್ವರ್ಡ್ ಆಗಿದ್ದಾಳೆ ಇದೆಲ್ಲ ಯಾಕೆ ಮಾಡಿದೆ ಎಂದರೆ ...ನನಗೆ ಉತ್ತರ ಅವತ್ತು ಗೊತ್ತಿರ್ಲಿಲ್ಲ ಆದರೆ ಇವಾಗ ಉತ್ತರ ಸಿಕ್ಕಿದೆ ಅನಿಸುತ್ತಿದೆ.....ಯಾಕಂದರೆ,,ಈ ರೀತಿ ಒಂದು ಆಟೋಗ್ರಾಪ್ ಸ್ಟೋರಿಗೆ ಬೇಕಿತ್ತೇನೋ ಇದೆಲ್ಲಾ.....ಅನಿಸುತ್ತೆ...
ನನ್ನ ಪ್ರತಿ ಕವನದ ಸ್ಫೂರ್ತಿ ಅವಳಾಗಿದ್ದಳು...ಒಂದು ರೀತಿಯಲ್ಲಿ ಹೇಳ್ಬೇಕಂದ್ರೆ ನನ್ನನ್ನು ಪರಿಪೂರ್ಣ ಕವಿ ಮಾಡಿದಳು ...ವಿಧಿ ವಿಪರ್ಯಾಸ ಅಂದರೆ...ನನ್ನಾವ ಕವನವನ್ನು ಅವಳು ಓದಲಿಲ್ಲ ಕಾರಣ ಅವಳಿಗೆ ಕನ್ನಡ ಬರುತ್ತಿರಲಿಲ್ಲ ..ಮಲೆಯಾಳಂನಲ್ಲಿ ಕವನ ಬರೆಯಲು ನನಗೆ ಮಲಯಾಳಂ ಬರುತ್ತಿರಲಿಲ್ಲ ...ಇನ್ನು ಇಂಗ್ಲಿಷ್ನಲ್ಲಿ ನನ್ನ ಭಾವನೆಗಳನ್ನು ವ್ಯಕ್ತಪದಿಸುವಷ್ಟು ಪರಿಣಿತ ನಾನಾಗಿರಲಿಲ್ಲ....
ಅಂತು ಇಂತೂ ಕಷ್ಟ ಪಟ್ಟು ಮಲಯಾಳಂ ಮಾತಾಡೋದು ಕಲಿತೆ ...ಅದೇ ಜೋಶ್ನಲ್ಲಿ ಕಾಲೇಜ್ ಡೇನಲ್ಲಿ "ಹೃದಯದಲ್ಲೂ ನೀನೆ ಇರುವೆ, ಕಣ್ ಮುಂದೆಯೂ ನೀನೆ ಇರುವೆ,,ಕಣ್ ಮುಚ್ಚಿದರು ನೀನೆ ಇರುವೆ,,ಫಾತಿಮಾ ..ಎಂಬ ಮಲೆಯಾಳಂ ಆಲ್ಬಮ್ ಹಾಡನ್ನು ನಾ ಇಷ್ಟ ಪಡುತ್ತಿರವ ಹುಡುಗಿಗಾಗಿ ಸಮರ್ಪಣೆ ಎಂದು ನಾನೇ ಹೇಳಿಕೊಂಡು ಒಂದು ರೀತಿಯಲ್ಲಿ ಹೀರೋ ಆದೆ,,,ಕಾರಣ ಕನ್ನಡದ ಹುಡುಗನೊಬ್ಬ ನಮ್ಮ ಕಾಲೇಜ್ ಇತಿಹಾಸದಲ್ಲಿ ಮಲಯಾಳಂ ಹಾಡು ಹಾಡಿದ್ದು ಪ್ರಥಮ ಆದರೆ ಅಸಲಿ ಪ್ರಾಬ್ಲಮ್ ಶುರುವಾಗಿದ್ದೆ ಅಲ್ಲಿಂದ .... ನಮ್ಮ ಶಿಕ್ಷಕರಿಂದ ಹಿಡಿದು ನನ್ನ ಫ್ರೆಂಡ್ಸ್ ನನ್ನ ಕ್ಲಾಸ್ ಮೇಟ್ಸ್ ... ಎಲ್ಲರದು ಒಂದೇ ಪ್ರಶ್ನೆ...ಯಾರದು ನಿನ್ನ ಫಾತಿಮಾ ?
ಈ ಪ್ರಶ್ನೆಗೆ ಹಾರಿಕೆಯ ಉತ್ತರಗಳನ್ನು ಕೊಡುತ್ತ ಕಾಲ ಕಳೆಯುತ್ತಿದ್ದೆ ,,ಆ ಸಮಯದಲ್ಲಿ ನಾ ಪ್ರೀತಿಸುತ್ತಿರುವ ಹುಡುಗಿಯು ಕೂಡ ನನ್ನನ್ನು ಕೇಳಿದಳು ಯಾರು ನಿನ್ನ ಫಾತಿಮಾ......ಹೇಗಾಗಿರಬಾರದು,,,ನನ್ನ ಪರಿಸ್ಥಿತಿ ...ಬಂದ ಕಣ್ಣಿರನ್ನು ತಡೆದುಕೊಂಡು ಏನೋ ಹಾರಿಕೆ ಉತ್ತರ ಕೊಟ್ಟು ತಪ್ಪಿಸಿಕೊಂಡೆ.......ಇಲ್ಲೂ ವಿಧಿ ಆಟ ಆಡಿತು ,,,,,
ಇನ್ನು farewell ಡೇ ಬಂತು ಕಷ್ಟಪಟ್ಟು ಸಾದನೆ ಮಾಡಿ ಅವಳೊಂದಿಗೆ ಒಂದು ಫೋಟೋ ತೆಗೆಸಿಕೊಂಡೆ,,, ಇಲ್ಲೂ ವಿಧಿ ಆಟ ಆಡಿತು ಅದೊಂದು ಫೋಟೋ ಬಿಟ್ಟು ಉಳಿದೆಲ್ಲ ಫೋಟೋ ಚೆನ್ನಾಗಿ ಬಂದಿದ್ದವು,,,,
ಇನ್ನು ಕೊನೆಯ ದಿನಗಳಲ್ಲಿ ಅವಳ ವರ್ತನೆ ಸ್ವಲ್ಪ ಬದಲಾಯಿತು ಕಾರಣ ಆಕೆಯೇ ನನ್ನ ಫಾತಿಮಾ ಎಂಬ ಅನುಮಾನ ಅವಳಲ್ಲಿ ಮೂಡಿರಬಹುದೆಂಬ ಅನಿಸಿಕೆ ನನ್ನದು....ಅದೇನಾಯಿತೋ ಏನೋ ಆಕೆ ಹೋಗುವಾಗ ನನಗೆ bye ಕೂಡ ಹೇಳದೆ ಹೋದಳು....
ಇದೆಲ್ಲಾ ಆದ ಮೇಲೆ ನಾನು ಸ್ವಲ್ಪ ದಿನ ಭಗ್ನ ಪ್ರೇಮಿ ಆಗಿದ್ದೆ..ಅವಾಗ ನನ್ನಲ್ಲಿ ಬಹಳ ಪ್ರಶ್ನೆ ಮೂಡಿದ್ದವು ,,ನಾ ಪ್ರೀತಿಸಿದ್ದು ತಪ್ಪಾ ,,,ನಾ ಅವಳಿಗೆ ಹೇಳದಿದ್ದು ತಪ್ಪಾ,,,ಅಥವಾ ಪ್ರೀತಿನೆ ತಪ್ಪಾ ಅಂತಾ... ಇಂತಹ ಪ್ರಶ್ನೆಗಳನ್ನು ಹೆದರಿಸುತ್ತಿರುವ ನನ್ನಂತಹ ಸಾವಿರಾರು ಬಡಪಾಯಿ ಹುಡುಗರಿದ್ದಾರೆ,,,, ಅವರಿಗೆಲ್ಲ ನಾ ಹೇಳುವುದು ಇಷ್ಟೇ ,,ನಿಮ್ಮ ಜೀವನದ ಘಟನೆಗಳನ್ನು ಮುಂದೊಂದು ದಿನ ನೆನೆದಾಗ ನಿಮಗೆ ನಗು ಬರುತ್ತದೆ ,,,,,ನಿಜ,,, ನಾನು ಈ ಅಂಕಣ ಬರೆಯುವಾಗ ನಕ್ಕಿದ್ದುಂಟು,,ನಾನು ಹೀಗೆಲ್ಲ ಮಾಡಿದ್ದೇನೆ ಎಂದು,,,,ಆದರೆ ಆ ನಗುವು ಮುಗಿಯು ಮುನ್ನ ನಿಮ್ಮ ಮನದಲ್ಲಿ ಎಲ್ಲೋ ಒಂದು ಕಡೆ ಹೇಳಲಾರದ ಒಂದು ,,,ಭಾವನೆ ಮೂಡುತ್ತದೆ,,,,ಕಣ್ ತುಂಬಿ ಬರುತ್ತದೆ ಅದೇ ನಿಮ್ಮ ನಿಷ್ಕಲ್ಮಶ ಪ್ರೀತಿ,,,,
ಇನ್ನು ...ಆಕೆ ಹೋದ ಮೇಲೆ ನಾ ಅವಳನ್ನು ಮಾತಾಡಿಸಿದ್ದು ಅವಳ ಹುಟ್ಟಿದ ದಿನದಂದು ...ಅವಳಿಗೆ ಶುಭಾಷಯ ಕೋರಲು ಕರೆ ಮಾಡಿದಾಗ ..ಹೀಗೆ ವಿಶೇಷ ಸಂದರ್ಭಗಳ ನೆಪ ಮಾಡಿಕೊಂಡು ಕಾಲ್ ಮಾಡುತ್ತಿದ್ದೆ ಆಕೆಯು ಮಾತನಾಡುತ್ತಿದ್ದಳು...ಈ ಬಾರಿ ಹೊಸ ವರ್ಷದಂದು ಕಾಲ್ ಮಾಡಿದಾಗ ,,ನನ್ನ ಮದುವೆ ನಿಶ್ಚಯವಾಗುವ ಲಕ್ಷಣಗಳಿವೆ..ಹಾಗೆ ಆದಲ್ಲಿ ನಾ ತಿಳಿಸುವೆ ನೀನು ಬರಬೇಕು ಎಂದಳು...ಏನು ಮಾತನಾಡಲಾಗದೆ ಹೂ ಎಂದು ಫೋನ್ ಇಟ್ಟೇ....ಈಗ ಅಂದರೆ ಫೆಬ್ರುವರಿ ಏಳರಂದು ಅವಳ ಮದುವೆ,,,,ಆಕೆ ನನ್ನನ್ನು ಕರೆಯಲಿಲ್ಲ ಬೇರೆ ನನ್ನ ಗೆಳತಿಯರಿಂದ ವಿಷಯ ತಿಳಿಯಿತು ನಾನು ಈ ಕಥೆ ಬರೆದು ಮುಗಿಸುವಹೊತ್ತಿಗೆ ಅವಳ ಮದುವೆ,,,ಬೇರೊಬ್ಬನ ಜೊತೆಗೆ ಕ್ಷಮಿಸಿ ಅವಳು ಇಷ್ಟಪಟ್ಟ ಹುಡುಗನ ಜೊತೆಗೆ ನೆಡೆದುಹೋಗಿದೆ,,,,ನಾ ಅವಳಿಗಾಗಿ ಕೊಡಬೇಕೆಂದು ಐದು ವರ್ಷದಿಂದ ಇಟ್ಟಿದ್ದ ನವಿಲುಗರಿ ನನ್ನೊಂದಿಗೆ ಉಳಿಯಿತು..ಪ್ರಾಯಶಃ ಮದುವೆಗೆ ಕರೆದಿದ್ದಾರೆ ..... ಅದನ್ನು ಆಕೆಗೆ ಕೊಡುವ,,ಕಾಲ ಕೂಡಿಬರುತಿತ್ತು....ಅದರಿಂದಲೂ ನಾ ವಂಚಿತನಾದೆ.....ಪಾಪ...ಮದುವೆಯ ಕಾರ್ಯದಲ್ಲಿ ಬ್ಯುಸಿ ಇರುವುದರಿಂದ ಮರೆತಿರಬೇಕು....ಹಾಗೆಂದುಕೊಂಡು ನನ್ನ ನಾ ಸಮಾದಾನ ಮಾಡಿಕೊಳ್ಳದೆ ಬೇರೆ ದಾರಿ ಇಲ್ಲ ...
ಗೆಳೆಯರೇ ನನ್ನ ಕಲ್ಪನೆಯ ಹುಡುಗಿ ಅವಳಾಗಿದ್ದಳು ,,,ಅದೇ ರೀತಿ ಅವಳಿಗೂ ಅವನ ಹುಡುಗನ ಬಗ್ಗೆ ಕಲ್ಪನೆ ಇದೆಯಲ್ಲವೇ,,ನಾನು ಅವನಾಗಿರಲಿಲ್ಲ ,,,,,,,,
ಗೊತ್ತಿಲ್ಲದವರಿಗೂ ಒಳ್ಳೆಯದಾಗಲಿ ಎಂದು ಹರಸುವ ನಾನು ......ನಾ ಪ್ರೀತಿಸಿದ ಕ್ಷಮಿಸಿ ನಾ ಪ್ರೀತಿಸುತ್ತಿರುವ ಹುಡುಗಿ ನನ್ನವಳಾಗಲಿಲ್ಲ ಎಂಬ ಮಾತ್ರಕ್ಕೆ ದ್ವೇಷಿಸುವುದು ಯಾವ ನ್ಯಾಯ..?
ಈ ಅಂಕಣದ ಮೂಲಕ ನಾ ಅವಳ ವೈವಾಹಿಕ ಜೀವನ ಶುಭವಾಗಿರಲೆಂದು ,,,,ಹಾರೈಸುತ್ತಿರುವೆ ,,,,ಹಾಗು ಈ ಅಂಕಣ ಓದಿದ ನನ್ನ ಗೆಳೆಯರಲ್ಲಿ ನಾ ಕೆಳುವುದಿಷ್ಟೇ ನೀವು ಕೂಡ ಅವಳ ವೈವಾಹಿಕ ಜೀವನಕ್ಕೆ ಶುಭವಾಗಲೆಂದು ಹಾರೈಸಿ

ನಾ ಬಯಸಿದ್ದೆ ನೀ ಹರಿಸುವೆ..
ನನ್ನ ಬಾಳಲ್ಲಿ ಪ್ರೀತಿಯ ಜಲಧಾರೆ...
ಆದರೆ ನೀನಾಗಿ ಹೋದೆ ನನಗೆ...
ಕೈಗೆಟುಕದ ತಾರೆ .............

WISH U HAPPY MARRIED LIFE DEAR .........
I MISS YOU ...........

ಇಷ್ಟೆಲ್ಲಾ ಆಯಿತು ,,ಮುಂದಾ.......
ದೇವದಾಸ್ ಆಗಿ.....ಹುಚ್ಚನ ತರಹ ತಿರುಗೋ,,,,,, ಯಾವ ಕಲ್ಪನೆಯೂ ಇಲ್ಲ ....ಯಾಕಂದ್ರೆ ಅವಳು ಅವಳನ್ನು ಪ್ರೀತಿಸುತ್ತಿದ್ದ ಒಂದು ಪ್ರೀತಿಯ ಪುಟ್ಟ ಹೃದಯವನ್ನು ಕಳೆದುಕೊಂಡಳು.....
ನಾನು ಕೂಡ ಏನು ಗಳಿಸಲಿಲ್ಲ ,,,ಆದರೆ....ನನಗಾಗಿ ಮುಡಿಪಿಟ್ಟ ಸುಮದುರ ಸುಂದರ ಸವಿ ಸವಿ ನೆನಪುಗಳು....ಕಾಮನಬಿಲ್ಲಿನಂತೆ...ಆಗಾಗ ಬಂದು ಹೋಗುತ್ತವೆ,,,,ಆ ಕಾಮನಬಿಲ್ಲು ಬಂದಾಗ ಎರಡನಿ ಮಳೆ ಬರಲೇಬೇಕು....ಆ ಮಳೆಯ ರೂಪವೇ ...ನನ್ನ ಕಣ್ಣೀರು .... ಆ ಕಣ್ಣೀರಿನ,,,ಹಿಂದಿರುವ ಬಿಂಬ ಎಂದಿಗೂ ಅವಳದೇ  ಆಗಿರುತ್ತೆ  ....
ಇದ್ದಿಷ್ಟು ಪ್ರೀತಿ ಆಯಿತು,,,, ಇದಕ್ಕೂ ಮೀರಿದ್ದು ಜೀವನ ...ಅದನ್ನು ನಡೆಸಲು.....ಮತ್ತೊಬ್ಬಳ..ಅವಶ್ಯಕತೆ..... ಇದ್ದೆ ಇದೆ.....
ಮುಂದಾ,,,,,,,ಮತ್ತೊಂದು ಹಕ್ಕಿಗಾಗಿ ಬೇಟೆ ಶುರು,,,, ಆದರೆ ಈ ಬಾರಿ ನಾ ಮಿಕವಾಗುವುದಿಲ್ಲ ...
                                                                                              ಸತ್ಯ ಸಿಂಪ್ಲಿ ಸ್ಟುಪಿಡ್.......

Wednesday, January 27, 2010

""ಸ್ನೇಹದ ಮಹಲು""

ಹಾಯ್ ಗೆಳೆಯರೇ,,,ಈ ಕವನ ಆರ್ಕುಟ್ನಲ್ಲಿ ಪರಿಚಯವಾದ ನನ್ನ ಗೆಳತಿಗಾಗಿ....
ಮದುವೆಯ ದಿಬ್ಬಣಕ್ಕೆ ಕಾಲಿಡಲು ನಿಂತಿರುವ ಆಕೆಗೆ.... ಈ  ಕವನದ ಮೂಲಕ..ನನ್ನ ಶುಭಾಶಯಗಳು...


ನಾವು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದೆವು ...
        ನಾವಿಬ್ಬರು ಅಪರಿಚಿತರು.....
               ಇದು ಬಹುದಿನದ ಹಿಂದಿನ ಮಾತು ......
  ಬೇಟಿಯಾಗಿದ್ದು ಆರ್ಕುಟ್ನಲ್ಲಿ .....
 ಪರಿಚಯವಾಗಿದ್ದು ಚಾಟಿಂಗ್ನಲ್ಲಿ ......
   ನಮಗೆ ತಿಳಿಯದೆ ನಮ್ಮ ಕಣ್ಣೆದುರು ಬೆಳೆದು ನಿಂತಿರುವ ....
ಸುಮದುರ ಬಾಂದವ್ಯವೇ....
    ಈ  ಗೆಳೆತನ....
ಈ ಸ್ನೇಹದ ಮಹಲಿನ ರೂವಾರಿಗಳು ...
 ನಾವಿಬ್ಬರು ....ಸತ್ಯ ಅಂಡ್ ಗೀತ ..
          ಇದು ಇಂದಿನ ಮಾತು...
ಮದುವೆಯ ದಿಬ್ಬಣಕ್ಕೆ ಕಾಲಿಡಲು ನಿಂತಿರುವ ..
ಹೆಸರಲ್ಲೇ ಹಿತವನ್ನು ತುಂಬಿರುವ .....
   ಓ ನನ್ನ ಗೆಳತಿ ಗೀತಾ ....
ನಿನ್ನ ಮುಂಬರುವ ವೈವಾಹಿಕ ಜೀವನ ಸುಕವಾಗಿರಲಿ ....
ಎಂದು ಮುಂಗಡವಾಗಿ ಹಾರೈಸುವ ....
ಬಲು ಅಪರೂಪದ ಗೆಳೆಯ ....
                        ಸಿಂಪ್ಲಿ ಸ್ಟುಪಿಡ್ ಸತ್ಯ .....

Saturday, January 23, 2010

ಕನಸುಗಾರ ......




















ಕಂಡೆ ನಾ ನಿನ್ನ ಕನಸಲ್ಲಿ
ಮರುಕ್ಷಣವೇ ನಿಂತೇ ನೀ ನನ್ನ ಮನಸಲ್ಲಿ....
ಕನಸಲ್ಲೇ ಕೊನೆಯಾದೆ...
ಮನಸಲ್ಲೇ ನೆಲೆಯಾದೆ...
ಮರೆಯಲಾಗದ ನೆನಪಾದೆ
ಅಳಿಸಲಾಗದ ಚಿತ್ರವಾದೆ....

                ಕನಸು ಮನಸುಗಳ ನಡುವೆ..
                                     ಮರೆಯದೆ ನೆನಪಾಗಿ....
ಕನಸೇಕೆ ಬಿತ್ತೆಂಬ..ಮನಸ್ಸಿನ  ಪ್ರಶ್ನೆಗೆ....
ಉತ್ತರ ತಿಳಿಯದೆ...
ಕನಸು ಕಾಣುವುದನ್ನೇ ಬಿಟ್ಟಿರುವೆ....
ಆದರೇನು ಮಾಡಲಿ...
ಕಣ್ ಮುಚ್ಚಿದರೆ ನೀನೆ ಕಾಣುವೆ...
                                      ಸತ್ಯ .......

Tuesday, January 19, 2010

ನಮ್ಮ ಪ್ರೀತಿಯ ಚಾಮಯ್ಯ ಮೇಸ್ಟ್ರು......


ಚಾಮಯ್ಯ ಮೇಸ್ಟ್ರೆ......
                  ಶಿಷ್ಯ ರಾಮಾಚಾರಿ ಹಿಂದೆ....
             ನೀವು..ಹೊರಟಿರ?
ನಿಮ್ಮ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ.....
                         ನಿಮ್ಮ ಅಭಿಮಾನಿ ವೃಂದ.....

Search This Blog