Thursday, March 11, 2010

ಮತ್ತೆ ಬರೆದೆ ಕವನ .....


ಬಹು ದಿನಗಳಾಯ್ತು
             ನಾ ಬರೆದು .....ಕವನ
ಎಷ್ಟೇ  ಪ್ರಯತ್ನಿಸಿದರೂ
      ಆಗುತ್ತಿಲ್ಲ ಕವನದ......ಜನನ
ಇದರಿಂದ ಪರಿತಪಿಸಿ ನೊಂದಿಹುದು
                 ಸತ್ಯನ ಈ....... ಮನ
ಭಾವನೆಗಳಿಗೇನು ಬರವಿಲ್ಲ .............
ಸ್ಪೂರ್ತಿಯ ಸೆಲೆ ಸದ್ಯಕ್ಕಂತೂ ಬತ್ತಿಲ್ಲ.....
ಪದಗಳ ಭಂಡಾರವು ಕ್ಷೀಣಿಸಿಲ್ಲ.....
ಇನ್ನು ನಾ ಕವಿಯೆಂಬ ನೆನಪು ನನ್ನಿಂದ ಮಾಸಿಲ್ಲ....
ಇಷ್ಟೆಲ್ಲಾ ಇದ್ದರು ನನ್ನಿಂದ ಕವಿತೆಯೊಂದು ಮೂಡುತ್ತಿಲ್ಲ
ಇದರಿಂದ ನಾ ಬೇಸತ್ತು...
ಇಂದು ಬರೆಯಲೇಬೇಕೆಂದು ಹೊರಟಾಗ..
ಮೂಡಿತು...ಈ ಕಿರು ಕವನ ........

                      ಸತ್ಯ ಸಿಂಪ್ಲಿ ಸ್ಟುಪಿಡ್........

Search This Blog