Tuesday, September 20, 2016

Nataraja service IAllah Allah Cauveri Version







ಈ ವರ್ಷದ ಸೂಪರ್ ಹಿಟ್ ಹಾಡು ನಟರಾಜ ಸರ್ವಿಸ್ ಚಿತ್ರದ ಅಲ್ಲಾ ಯಾ ಅಲ್ಲಾ... ಈ ಹಾಡಿಗೆ
ಸದ್ಯದ ನಮ್ಮ ಕಾವೇರಿ ಸಮಸ್ಯೆಯ ಪರಿಸ್ಥಿತಿಯನ್ನು ಹೋಲಿಸಿ ರಚಿಸಿದ ಸಾಲುಗಳು.. ಕೇಳಿ
ನಿಮ್ಮ ಅಭಿಪ್ರಾಯ ತಿಳಿಸಿ

ಗಾಯಕರು : ರವಿಕಿರಣ್ ಎಸ ಎಮ್

ಸಾಹಿತ್ಯ : ಸತೀಶ್ ಎ .ಎಸ್

Thursday, September 15, 2016

ಮುಂಗಾರು ಮಳೆ -೨.. ಚಿತ್ರ ವಿಮರ್ಶೆ

ಮುಂಗಾರು ಮಳೆ -೨.. ಕನ್ನಡದ ಬಹು ನಿರೀಕ್ಷಿತ ಚಿತ್ರ...ಈ ಚಿತ್ರದ ಸೀಕ್ವೆಲ್ ಮಾಡಲು ಧೈರ್ಯ ಮಾಡಿದ ನಿರ್ದೇಶಕರಾದ ಶಶಾಂಕ್ ರವರನ್ನು ಅಭಿನಂದಿಸಲೇಬೇಕು....
ಕಾರಣ ಪ್ರೇಕ್ಷಕ ಚಿತ್ರದ ಪ್ರತಿ ಆಯಾಮವನ್ನು ಭಾಗ ೧ ಕ್ಕೆ ತಳುಕು ಹಾಕುವುದಂತೂ ಕಟ್ಟಿಟ್ಟ ಬುತ್ತಿ.. ಇದರ ಅರಿವಿರುವ ನಿರ್ದೇಶಕರು ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದಾರೆ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಚಿತ್ರ ಬಿಡುಗಡೆಗೆ ಮುನ್ನವೇ ಸುಳಿವು ಕೊಟ್ಟಿದ್ದಾರೆ..
"ಕಾಲ ಬದಲಾಗಿದೆ..
ಪ್ರೀತಂ ಕೂಡ ಬದಲಾಗಿದ್ದಾನೆ..
ಅವನ ದೃಷ್ಠಿಕೋನವು ಬದಲಾಗಿದೆ"
ಆದರೆ....

"ನೋಡುಗರ ದೃಷ್ಠಿಕೋನವೂ ಬದಲಾಗಬೇಕಿದೆ"
ಸಿನಿಮಾ ನೋಡದ ಎಷ್ಟೋ ಜನ..ಯಾರೋ ಕೆಲವರ ನೆಗೆಟೀವ್ ಪಬ್ಲಿಸಿಟಿಗೆ ಒಳಗಾಗಿ ಸಿನಿಮಾ ಚೆನ್ನಾಗಿಲ್ಲ ಎಂದೂ ನಿರ್ಧರಿಸುವುದು ಅದೆಷ್ಟರ ಮಟ್ಟಿಗೆ ಸರೀಯೋ ನಾ ಕಾಣೆ...
ರಿಮೇಕ್ ಸಿನಿಮಾಗಳಿಗೆ ಜೈ ಅನ್ನುವಾ ಮೊದಲೂ.. ನಮ್ಮ ನಿರ್ದೇಶಕರ ಕನ್ನಡದ ಸ್ವಮೇಕ್ ಚಿತ್ರಗಳಿಗೆ ಬಂಬಲಿಸಿ..ಒಬ್ಬ ನಿರ್ದೇಶಕ ಒಂದು ಸ್ವಮೇಕ್ ಚಿತ್ರವನ್ನು ತೆರೆಯ ಮೇಲೆ ತರುವುದು ಸುಲಭದ ಮಾತಲ್ಲ..ಆ ಚಿತ್ರವನ್ನು ನೋಡಿ ನಂತರ ಆ ಚಿತ್ರದ ಬಗ್ಗೆ ಕಮೆಂಟ್ ಮಾಡುವುದು ಸರಿ ಅನಿಸುತ್ತದೆ..ಯಾರೋ ಹೇಳಿದ ಮಾತನ್ನು ಕೇಳಿ ನಾವು ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುವುದು ಒಬ್ಬ ಸದಭಿರುಚಿಯ ಪ್ರೇಕ್ಷಕನ ಲಕ್ಷಣವಲ್ಲ...
ಮುಂಗಾರು ಮಳೆ ಸಿನಿಮಾವನ್ನೆ ಬಯಸಿದ್ದೆ ಆದರೆ..ಭಟ್ಟರ ಭಾಗ ೧ ನ್ನು ನೋಡಬಹುದು..
ಇದು ಭಾಗ ೨....
ಕಣ್ಣಿಗೆ ಮುದ ನೀಡುವ ಶೇಖರ್ ಚಂದ್ರಾರವರ ಛಾಯಾಗ್ರಹಣವಿದೆ..
ಕಿವಿಗೆ ಇಂಪೆನಿಸುವ ಜನ್ಯಾರವರ ಸಂಗೀತವಿದೆ..
ಕವಿ ಶ್ರೇ಼ಷ್ಠರ ಸುಮಧುರ ಸಾಹಿತ್ಯವಿದೆ..
ಕಥೆಯ ನಿರೂಪಣಾ ಶೈಲಿಯಲ್ಲಿ ತಾಜಾತನವಿದೆ..
ಗಣೇಶ್ ಮತ್ತೊಮ್ಮೆ ಮನಸ್ಸಿಗೆ ಹತ್ತಿರವಾಗುತ್ತಾರೆ..
ರವಿಚಂದ್ರನ್ ಅಪ್ಪನ ಪಾತ್ರದಲ್ಲಿ "ಹೀರೋ" ಆಗಿದ್ದಾರೆ..
ನೇಹಾ ಶೆಟ್ಟಿ ಮೊದಲ ಚಿತ್ರದಲ್ಲೆ..ಚಂದನವನದಲ್ಲಿ ನೆಲೆಯೂರುವ ಮುನ್ಸೂಚನೆ ನೀಡಿದ್ದಾರೆ...
ಐಂದ್ರಿತಾ ..ಪಾತ್ರದಲ್ಲಿ ಪ್ರೀತಂಗೆ ಬೋರೆನಿಸುತ್ತಾರೆ ಆದರೆ ಪ್ರೇಕ್ಷಕನಿಗಲ್ಲ..
ಸಾಧುರವರು ಹಾಸ್ಯದಲ್ಲಿ, ರವಿಶಂಕರ್ ಅಪ್ಪನ ಪಾತ್ರದ ಗಂಭೀರ ನಟನೆಯಲ್ಲಿ ಇಷ್ಟವಾಗುತ್ತಾರೆ...
ಯೂರೋಪ್ ಹಾಗು ರಾಜಸ್ಥಾನ ಮತ್ತು ಮಡಿಕೇರಿಯ ರಮ್ಯ ಸ್ಥಾನಗಳು ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ಅದ್ಬುತವಾಗಿ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕರು..
ಇಷ್ಟೆಲ್ಲಾ ಇರುವ ಮುಂಗಾರುಮಳೆ ೨ ..ಸದಭಿರುಚಿಯ ಪೈಸಾ ವಸೂಲ್ ಮೂವಿ ಎಂದೂ ಹೇಳಿದರೆ ಅತಿಶಯೋಕ್ತಿ ಎನಿಸುವುದಿಲ್ಲ...
ಒಬ್ಬ ನಿರ್ದೇಶಕನಾಗಿ ಶಶಾಂಕ್ ರವರು ಗೆದ್ದಿದ್ದಾರೆ....ಬಂದ್ ಹಾಗು ಗಾಸಿಪ್ಗಳಿಂದ ಚಿತ್ರಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ..
ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಿ....
ವಿಶೇಷ ಸೂಚನೆ : ಯಾವುದೇ ಒಂದು ಸಿನಿಮಾವನ್ನು ವೀಕ್ಷಿಸದೆ.. ಯಾರದೋ ಮಾತನ್ನು ಕೇಳಿ..ಹೊಗಳದಿದ್ದರೂ ಪರವಾಗಿಲ್ಲ ತೆಗಳಬೇಡಿ...
ನಿರ್ದೇಶಕನ ಕನಸು, ನಿರ್ಮಾಪಕನ ಹಣ, ಕಲಾವಿದರ,ತಂತ್ರಜ್ಞರ ಶ್ರಮದ ಪ್ರತಿಫಲದಿಂದ ಒಂದು ಉತ್ತಮ ಚಿತ್ರವಾಗುತ್ತದೆ..ಹಲವಾರು ಜನರ ಭವಿಷ್ಯ ಅದರಲ್ಲಿ ಅಡಗಿರುತ್ತದೆ...
ಈ ಎಲ್ಲಾ ದಿಸೆಗಳಲ್ಲಿ ಮುಂಗಾರು ಮಳೆ ೨...ಒಂದು ಉತ್ತಮ ಚಿತ್ರ..
ನೋಡದೆ ಇದ್ದ ಪಕ್ಷದಲ್ಲಿ ..ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ವೀಕ್ಷಿಸಿ..

                                                            ಸತೀಶ್ ಎ.ಎಸ್

ನೀರ್ ದೋಸೆ ಚಿತ್ರ ವಿಮರ್ಶೆ


"ನೀರ್ ದೋಸೆ " - ಹೂಟ್ಟೆ ಹುಣ್ಣಾಗುವಷ್ಟು ನಗು ಮತ್ತು ಮನಸ್ಸಿಗೆ ಹತ್ತಿರವಾಗುವ ಮೌಲ್ಯಗಳನ್ನೊಳಗೊಂಡ ಸಂಭಾಷಣೆಯ ರಸವತ್ತಾದ ಔತಣ....
ನಿರ್ದೇಶಕ ವಿಜಯ್ ಪ್ರಸಾದ್ ಜೀವನದ ವಿವಿಧ ಅನುಭವಗಳನ್ನು ನಾಲ್ಕು ಪಾತ್ರಗಳ ಜೊತೆ ತಮ್ಮ ವಿಭಿನ್ನ ಹಾಸ್ಯದ ಸಂಭಾಷಣೆಯ ಮೂಲಕ ರುಚಿಯಾಗಿ ಉಣಬಡಿಸಿದ್ದಾರೆ..ಇದರಲ್ಲಿ ಉಪ್ಪು ಹುಳಿ ಕಾರ ಕಹಿ ಸಿಹಿ ಎಲ್ಲಾ ಇದೆ, ಮೇಲ್ನೋಟಕ್ಕೆ ಸಿನಿಮಾದಲ್ಲಿ ದ್ವಂದ್ವಾರ್ಥದ ಡೈಲಾಗ್ ಇರುವದಂತೂ ಸತ್ಯ ಆದರೆ ಪ್ರತಿ ಡೈಲಾಗ್ ಹಿಂದೆ ಜೀವನಕ್ಕೆ ಬೇಕಾದ ಮೌಲ್ಯಗಳು ತುಂಬಾ ಇದೆ.. ಸಿನಿಮಾ ನೋಡಿದ ಪ್ರೇಕ್ಷಕನ ಮುಖದಲ್ಲಿ ನಗು ಕಾಣುವುದಂತೂ ಸತ್ಯ..ಕೊಟ್ಟ ದುಡ್ಡಿಗೆ ಮೋಸವಿಲ್ಲ..
ಜಗ್ಗೇಶ್ ಸರ್ ಹೆಸರಿಗೆ ತಕ್ಕಂತೆ ನವರಸ ನಾಯಕ ಮತ್ತೊಮ್ಮೆ ಮಠ ಚಿತ್ರವನ್ನು ನೆನಪಿಸಿದ್ದಾರೆ ತಮ್ಮ ವಿಶಿಷ್ಠ ನಟನೆ ಹಾಗು ಮ್ಯಾನರಿಸಂನಿಂದ ರಂಜಿಸಿದ್ದಾರೆ...ಹಾಗು ದತ್ತಣ್ಣ ಈ ಪಾತ್ರದಿಂದ ಮತ್ತಷ್ಟು ಹತ್ತಿರವಾಗುತ್ತಾರೆ.. "ಆಗುವುದೆಲ್ಲಾ ಒಳ್ಳೆಯದಕ್ಕೆ" ಎಂಬುದು ಈ ಚಿತ್ರದಲ್ಲಿ ಹರಿಪ್ರಿಯಾರವರ ನಟನೆ ನೋಡಿ ನಿಜ ಅನಿಸಿತು..ಕಾರಣಾಂತರಗಳಿಂದ ಸಿಕ್ಕ ಪಾತ್ರಕ್ಕೆ ನೂರು ಪ್ರತಿಶಹ ನ್ಯಾಯ ಒದಗಿಸಿದ್ದಾರೆ..ಸುಮನಾ ರಂಗನಾಥ್ ಕೂಡ ತುಂಬಾ ಇಷ್ಟವಾಗುತ್ತಾರೆ..
ಈ ಚಿತ್ರದ ಮತ್ತೊಂದು ಧನಾತ್ಮಕ ಅಂಶ ಅನೂಪ್ ಸೀಳಿನ್ ರವರ ಹಿನ್ನಲೆ ಸಂಗೀತ..ಅದ್ಬುತವಾಗಿ ಮೂಡಿ ಬಂದಿದೆ..
"ಬದುಕಿನ ಎಲ್ಲಾ ಪಾಠಗಳನ್ನು ಅನುಭವಿಸಿ ಕಲಿಯಲು ಅಸಾಧ್ಯ..ಕೆಲವನ್ನು ಈ ಸಿನಿಮಾದಿಂದ ಕಲಿಯಬಹುದು ಎಂಬುದು ನನ್ನ ಅನಿಸಿಕೆ"
ಸಿನಿಮಾದ ಕೊನೆಯಲ್ಲಿ ಇಷ್ಟ ಆಗದೆ ಇದ್ರೆ ಮುಖಕ್ಕೆ ಉಗೀರಿ ಅಂತಾ ಹೇಳಿದಿರಾ....ನೋಡಿದ ಪ್ರತಿಯೊಬ್ಬರೂ ಹೊಗಳುತಿದ್ದಾರೆ...ಈ ಹೊಗಳಿಕೆ ಇಡೀ ಚಿತ್ರತಂಡಕ್ಕೆ..ವಿಶೇಷವಾಗಿ ನಿರ್ದೇಶಕ ವಿಜಯ್ ಪ್ರಸಾದ್ ಸರ್ ರವರಿಗೆ..

                                                                  ಸತೀಶ್ ಎ.ಎಸ್ ..


A TRIBUTE TO TEAM MUNGARU MALE 2









ಚಂದನವನದಲ್ಲಿ ಮತ್ತೆ ಮಳೆ ಸುರಿಸಲು ಮುಂದಾದ ಮುಂಗಾರು ಮಳೆ ೨ ತಂಡಕ್ಕೆ .... 
ಅಭಿಮಾನದ ಅಭಿನಂದನಾ ಗೀತಾರ್ಪಣೆ....
ಮುಂಗಾರು ಮಳೆ -೨.. ಕನ್ನಡದ ಬಹು ನಿರೀಕ್ಷಿತ ಚಿತ್ರ...ಈ ಚಿತ್ರದ ''ಸರಿಯಾಗಿ ನೆನಪಿದೆ ನನಗೆ" ಹಾಡಿಗೆ ಗುರುಗಳಾದ ಜಯಂತ್ ಕಾಯ್ಕಿಣಿವರು ಸಾಹಿತ್ಯ ಬರೆದಿದ್ದು ..ಎಲ್ಲರಿಗೂ ಇಷ್ಟವಾಗಿದ್ದು ಗುನುಗಲು ಶುರು ಮಾಡಿರುವುದಂತೂ ನಿಜ.. ಈ ಹಾಡಿನ ಸಂಗೀತಕ್ಕೆ ನನಗೂ ಸಾಹಿತ್ಯ ಬರೆಯಬೇಕೆನಿಸಿ ಮಾಡಿದ ಪ್ರಯತ್ನದ ಫಲ....ಈ ಸಾಲುಗಳು...
ಈ ಸಾಲುಗಳಿಗೆ ಧ್ವನಿಯಾಗಿರುವುದು ಗೆಳೆಯ ರವಿಕಿರಣ್
ಉತ್ತಮ ಸಂಗೀತ ನೀಡಿದ ಅರ್ಜುನ್ ಜನ್ಯಾರವರಿಗೆ ಹಾಗು ಸೀಕ್ವೆಲ್ ಮಾಡಲು ಧೈರ್ಯ ಮಾಡಿದ ನಿರ್ದೇಶಕರಾದ ಶಶಾಂಕ್ ರವರಿಗೆ ಧನ್ಯವಾದಗಳು....
ಮುಂಗಾರು ಮಳೆ ತಂಡಕ್ಕೆ ಶುಭಾಷಯಗಳು...
ಕನಸಲ್ಲಿ ಕೆಣಕಿದೆ ನನಗೆ...
ಇದಕೆಲ್ಲಾ ಕಾರಣ ಕಿರುನಗೆ...
ಮನದಾ..
ಪ್ರತಿ ಹಾಳೆಯೊಳಗೂ ನಿನದೇ ಬರವಣಿಗೆ...
ಕನಸಿನ ಒಲುಮೆಗೆ ಹೆಸರನು ಹುಡುಕುತಾ...
ಅಲೆದಾಡುವುದು....
ಇನ್ನು ಖಚಿತಾ.. ‌‌‌‌ |‌‌‌‌|ಕನಸಲ್ಲಿ||
ನಿನ್ನಲ್ಲೇ ಇದೆ‌ ಎಲ್ಲಾ ಉತ್ತರ...
ನೀನೆ ನನ್ನಯ ಪ್ರಶ್ನಾ ಪತ್ರಿಕೆ....
ಕಣ್ಣಾ ಮುಚ್ಚಲೂ ನೀನೆ ಕಾಣುವೆ..
ನೀನೆ ದೀವಿಗೆ ನನ್ನ ಬಾಳಿಗೆ...
ಬರೆದೂ ನಾನು ಮುದ್ದಾದ ಅಧ್ಯಾಯ...
ಕೂಗಿ ಹೇಳುವೆ ನಿನ್ನಸರೆ ಉಪಮೇಯ..
ನನ್ನಯ ಪ್ರತಿನುಡಿ ನಿನ್ನನೇ ಜಪಿಸುತಾ...
ಹಾಡಾಗುವುದು....
ಇನ್ನು ಖಚಿತಾ.... ||ಕನಸಲ್ಲಿ||
ನಿನ್ನ ನೋಟಕೆ ಸೋತು ಹೋಗಿದೆ..
ಗೆಲುವೆ ಬೇಡದ ನನ್ನ ಹೃದಯವೂ...
ನಿನ್ನ ಕಾಣದ ನನ್ನ ಜೀವಕೆ..
ಊಹೆ ಮೀರಿದ ಅಂಧಕಾರವೂ...
ಕಣ್ಣ ಕರೆಗೆ ನಾನಾದೆ ನಿನ್ನೋನು..
ಕಣ್ಣಂಚಲ್ಲೇ ಉಳಿಬೇಡ ನೀನಿನ್ನೂ...
ಕನಸಿನ ಮಡುವಲಿ ನೆನಪನೂ ಕೆದಕುತಾ...
ಕಳೆದೋಗುವುದು..
ಇನ್ನು ಖಚಿತಾ.... ‌‌‌||ಕನಸಲ್ಲಿ||

ಸಾಹಿತ್ಯ : ಸತೀಶ್ ಎ .ಎಸ್
ಗಾಯನ : ರವಿಕಿರಣ್ ಎಸ್ ಎಮ್

Search This Blog