Thursday, December 31, 2009

ಎದ್ದೇಳು ಕನ್ನಡಿಗ....



ಕನ್ನಡಿಗರಲ್ಲಿ ಮನವಿ.......
             ಎದ್ದೇಳಿ....ಸಾಕು ನಿಮ್ಮ ಉದಾರತೆ ..ಇಲ್ಲದಿದ್ದರೆ
             ಮಲಗಿದಲ್ಲೇ ಮಣ್ಣು ಮುಚ್ಚುವರು...ಈ ಹೊಸ ವರ್ಷದಿಂದ ಹೊಸ ಮನುಷ್ಯರಾಗಿ
ಕಳೆದು ಹೋಗುತ್ತಿರುವ ನಮ್ಮ ಕನ್ನಡವನ್ನು ಉಳಿಸಿಕೊಳ್ಳೋಣ ....ಇಂದು ನೀವು ಏಳದಿದ್ದರೆ ಮುಂದೆ ನಿಮ್ಮ ಮಕ್ಕಳು ಮಲಗಲು ಸಾದ್ಯವಿಲ್ಲ ,,,,, ಪರಭಾಷೆಯ ವ್ಯಾಮೋಹ ಸಾಕು.....ಉಳಿಸಿ ಬೆಳಸಿ ನಮ್ಮ ಕನ್ನಡವನ್ನು......
ಮಲಗಿದಲ್ಲೇ ಮಣ್ಣು ಮುಚ್ಚಿ ಕೊಂದರು ...ನಮ್ಮ ಮಣ್ಣಲ್ಲೇ ನಾ ಸಾಯುತ್ತಿರುವೆ  ಎನ್ನುವ ನಿಮ್ಮ ಉದಾರತೆಯನ್ನು ಸಾಕು ಮಾಡಿ ಈ ಹೊಸ ವರ್ಷದಿಂದ ಪರಭಾಷೆಯವರ ಜೊತೆ ಕನ್ನಡದಲ್ಲಿ ಮಾತನಾಡಿ ಈ ಕನ್ನಡ  ನಿಮ್ಮದು...ಗೆಳೆಯರೇ....ಈ ಕವನದ  ಉದ್ದೇಶ ಪ್ರಶಸ್ತಿ ಗೆಲ್ಲಬೇಕು ಅಥವಾ ನಾ ಕವಿಯೆಂದು ತೋರಿಸಬೇಕೆಂದಲ್ಲ ,,,,,ಈ ಕವನ ಓದಿದವರಲ್ಲಿ ಹತ್ತು ಜನ... ಅವರ ಪರಭಾಷೆಯ ಗೆಳೆಯರು ಸಿಕ್ಕಿದಾಗ ಒಣಕ್ಕಂ ಅನ್ನುವ ಮುಂಚೆ ಈ ಕವನವನ್ನು ನೆನೆದು ನಮಸ್ಕಾರ ಎಂದರೆ ನಾ ರುಣಿಯಾಗಿರುವೆ...ನಮೆಲ್ಲ ಗೆಳೆಯರಿಗೆ ಹೊಸ ವರ್ಷದ ಶುಭಾಶಯಗಳು.....
         ಎಲ್ಲ ಭಾಷೆ ಕಲಿಯಿರಿ ಆದರೆ ಕನ್ನಡವನ್ನು ಉಳಿಸಿ ಬೆಳಸಿ......
       
       
ಎದ್ದೇಳು ಕನ್ನಡಿಗನೇ
         ಹೊಸ ವರುಷ ಬಂದಿಹುದು ...
ಮಲಗಿದಲ್ಲೇ ಮಣ್ಣು ಮುಚ್ಚುವ ಜನರಿಹರು ...
                   
 ಬಂದವರಿಗೆಲ್ಲ ಬಾ ಎಂದು....
ನೀ ಸಹೃದಯಿಯಾದೆ ,,,
             ಸಾಕು ಮಾಡು....
ಬಂದವರೆಲ್ಲ ಯೋಗ್ಯರಲ್ಲ ......
ಬಂದವರನ್ನು ಬದಲಾಯಿಸು....
ನೀ ಬದಲಾಗದಿರು....

           ಉದಾರತೆಯ ಉತ್ತುಂಗದಲಿ
                  ಹಾರುವ ಮುನ್ನ .......
   ನೆನೆಸಿಕೊ ಒಮ್ಮೆ......
          ರೆಕ್ಕೆ ಇಲ್ಲದ ಹಕ್ಕಿಯನ್ನ......

ಸ್ವಾರ್ತಿಯಾಗು....
         ನಿನಗಾಗಿ ಅಲ್ಲ
ನಿನ್ನ ನೆಲ ಜಲ ಭಾಷೆಗಾಗಿ...

ಭಾಷೆ ಉಳಿವಿಗೆ ...
ಬೇಕಿಲ್ಲ ಗೆಳೆಯ ಬಲಿಧಾನ....
ಮೊದಲು ನೀ ನುಡಿ ನಿನ್ನ ಭಾಷೆಯ ,,,
ಕಂಡಾಗ ಪರಭಾಷೆಯ ಮಹಾಶಯ..........

                ಸತ್ಯ..........

4 comments:

manu.b said...

kannadada kandanaagi huttiddakke indu ninna jeevana sarthaka vaagide,,, maga,, jai karnaataka maate,,,,
definitely i'll follow

Unknown said...

danyavaadagalu manuravare,,,, jai karnataka maate

Ashok.V.Shetty, Kodlady said...

Satya...Very Nice...Nimma Kannada Premavannu kavanada mulaka tumbaa chennagi varnisiddiri....Keep it up.....

Unknown said...

danyavaadagalu ashok,,,

Search This Blog