Thursday, December 03, 2009

'ಬಂಜರೆದೆಯ ಒಡೆಯ''


'

ಬಂದವರೆಲ್ಲ ಪ್ರೀತಿ ಎಂಬ
ಬೀಜ ಬಿತ್ತಿದರು.....
ಬಿತ್ತಿದ ಬೀಜಕ್ಕೆ....
ಭಾವನೆಗಳ ಮಳೆ ಸುರಿಸಿ
ಕನಸಿಂದ ಆರೈಕೆ ಮಾಡುತ್ತ
ಪಸಲಿಗಾಗಿ ಕಾಯುತಿದ್ದೆ....
ಪಸಲು ಬರುವ ಮುನ್ನವೇ
ಬೆಳೆದು ನಿಂತ ಪ್ರೀತಿಯ ಮರವನ್ನು
ಬುಡ ಸಮೇತ ಕತ್ತರಿಸಿ
ನೆನಪೆಂಬ ಬೇರನ್ನು ಬಿಟ್ಟಿದ್ದಾರೆ.....
ಬತ್ತಿರುವ ಭಾವನೆಗಳಿಂದ
ಮಳೆ ಸುರಿಸಲಾಗದೆ ...
ಕಮರಿ ಹೋಗಿರುವ ಕನಸುಗಳಿಂದ
ಉಳುಮೆ ಮಾಡಲಾಗದೆ
ಪರಿತಪಿಸುತ್ತಿರುವ .....
''ಬಂಜರೆದೆಯ ಒಡೆಯ ನಾನು''.......

                                     ಸತ್ಯ .........

3 comments:

Ashok.V.Shetty, Kodlady said...

ಸುಂದರ ಕವನ....ಭಾವನೆಗಳ ಮಿಶ್ರಣ, ಪದಗಳ ಜೋಡಣೆ ಚೆನ್ನಾಗಿದೆ...

Unknown said...

danyavaadagalu ashok....

Unknown said...
This comment has been removed by a blog administrator.

Search This Blog